ಸರತಿಯಲಿ ನಿಂತವರು

ಸಾವು ಮಾರಾಟಕ್ಕಿದೆ ಇಲ್ಲಿ
ಜಗದ ಮಾರುಕಟ್ಟೆಯಲ್ಲಿ
ತಕ್ಕಡಿಯ ಒಂದು ಬದಿ
ಹಸಿವು
ಕಲ್ಲಾಗಿದೆ
ಇನ್ನೊಂದು ಬದಿ
ಗ್ರೆನೇಡುಗಳು ಹಿಟ್ಟಿನ
ಮುದ್ದೆ!

ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ
ಸಣ್ಣ ಕಂದಮ್ಮಗಳ ಎದೆಯ
ಗೂಡಲ್ಲಿ
ಇನ್ನೂ ಜೀವವಿದೆ
ತೂರಿ
ಆಟವಾಡುತ್ತಿವೆ ಕೈ
ಬಾಂಬುಗಳನ್ನೇ ಚೆಂಡೆಂದು

ಬತ್ತಿದ ಮೊಲೆಯ ತಾಯಂದಿರು
ಬಂದೂಕುಗಳ ಹಿಡಿದು
ಒಲೆ ಹಚ್ಚಿದರೆ
ಅನ್ನದ ಡಬರಿಯಲಿ ತಮ್ಮದೇ
ಕೂಸುಗಳು
ಕುದಿಯುತ್ತಿವೆ ಕೊತ ಕೊತ
ಸಣ್ಣ ಕರುಳು, ಬೋಟಿ, ಖಲೀಜ

ಅಂಗಳದಿ ಅಪ್ಪಂದಿರು ರಾತ್ರಿ
ಯ ಚಳಿ ಕಾಯಿಸಲು
ಹುಡುಕಬೇಕಿಲ್ಲ
ಯಾವ ಹುಲ್ಲಿನ ಬಣವೆಯನ್ನೂ
ಹಾರುವ ವಿಮಾನಗಳು ಖಂಡಿತ
ಉದುರಿಸುತ್ತವೆ ಮಿಸೈಲು
ಬಾಂಬು
ಬೆಂಕಿ ಸಹಿತ

ರಕ್ತದ ರುಚಿ ಹೊತ್ತ
ಸಾವು
ತೂಗುವ ತಕ್ಕಡಿಗೆ
ಗೆದ್ದಲು ಹಿಡಿಯುವ ದಿನ
ದೂರವಿಲ್ಲ
ಸರತಿಯಲಿ ನಿಂತವರು
ನಾವೇ
ಕೊನೆಯಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದು ಯಾರದು ಯಾರದು?
Next post ಮ್ಯಾಟಿನಿ ಶೋ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys